
ಮೋದಿಯ ಪರವಾಗಿ ಪ್ರಚಾರ ಮಾಡುತ್ತಿರುವ ನಮ್ಮಂತವರಿಗೆ ರಾಜಕೀಯದ ನಂಟು ಇಲ್ಲ. ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ. ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ. ರಾಜಕಾರಣದ ಹತ್ತಿರವೂ ನಾವುಗಳು ಸುಳಿಯುವುದಿಲ್ಲ. ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾದ್ದಿಲ್ಲ. ಆದರೂ ನಾವುಗಳು ಮೋದಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಮೋದಿ ಅದು ಹೇಗೆ ತನ್ನತ್ತ ಸೆಳೆದ. ಅದ್ಯಾವ ಶಕ್ತಿ ಮೋದಿಯಲ್ಲಿದೆ. ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಮೋದಿಯ ಮೋಹಕ್ಕೆ ಸಿಕ್ಕಿಕೊಂಡೆವು. ಮೋದಿಯಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ.?
ಅಸಹ್ಯ ರಾಜಕಾರಣಿಗಳಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ, ಈ ದೇಶಕ್ಕೆ ಇನ್ನು ಭವಿಷ್ಯವಿಲ್ಲವೆಂದು ತೀರ್ಮಾನಿಸಿ, ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು , ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖವಾಗಬೇಕಾದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಮೋದಿ.
ಮತ್ತೆ ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು , ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗೃತನಾದ, ಮೋದಿಯನ್ನು ಉಳಿಸಿಕೊಳ್ಳದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲವೆಂದು ಅರಿತ.
ಜಗತ್ತಿನಲ್ಲೇ ಯಾವ ರಾಜಕಾರಣಿಗೂ ಈ ರೀತಿ ಶ್ರೀ ಸಾಮಾನ್ಯನು ಪ್ರಚಾರಕನಾಗಿಲ್ಲ.
ಭಾರತೀಯರು ಇದುವರೆಗೂ ಸಿನಿಮಾ ನಾಯಕರ ಮೋಹಕ್ಕೆ ಒಳಗಾಗುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಒಬ್ಬ ಸಿನಿಮಾ ನಾಯಕರನ್ನ ಮೀರಿ ಮೋದಿ ಜನರನ್ನ ತನ್ನತ್ತ ಸೆಳೆದ. ಭಾರತೀಯರು ಯಾವುದೇ ರಾಜಕಾರಣಿಯನ್ನ ನಾಯಕನಂತೆ ಒಪ್ಪಿಕೊಂಡಿರಲಿಲ್ಲ.
ಮೋದಿ ಭಾರತವನ್ನು ಮಾತ್ರ ಬದಲಾಯಿಸುತ್ತಿಲ್ಲ ಭಾರತೀಯ ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟರು.
ಈಗ ಭಾರತೀಯರ ಕಣ್ಣಲ್ಲಿ ಒಂದು ಕನಸಿದೆ ಅದರ ಭಾರ ಮೋದಿಯ ಮೇಲಿದೆ. ಮೋದಿಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.*

*ಈ ಸಂದೇಶವನ್ನ ಮತ್ತೊಬ್ಬರಿಗೆ ಕಳಿಸುವ ಹೊಣೆ ನಿಮ್ಮ ಮೇಲಿದೆ...*
No comments:
Post a Comment